Tuesday 9 August 2022

ಶ್ರೀ ಶ್ರೀಪಾದ ಹೆಗಡೆ, ಮಂಡೇಮನೆ, ವಾನಳ್ಳಿ, ಶಿರಸಿ ಇವರೊಂದಿಗೆ ಸಂದರ್ಶನ- 2017

ಶ್ರೀ ಶ್ರೀಪಾದ ಹೆಗಡೆ, ಮಂಡೇಮನೆ, ವಾನಳ್ಳಿ, ಶಿರಸಿ ಇವರೊಂದಿಗೆ ಸಂದರ್ಶನ- 2017

ಶ್ರೀ ಸುಬ್ರಾಯ ಹೆಗಡೆ, ಕಬ್ಬಿನಗದ್ದೆ- ಬೂರನ್-ತ್ಯಾಗಲಿ ಇವರೊಂದಿಗಿನ ಸಂದರ್ಶನ -2014

  ಶ್ರೀ ಸುಬ್ರಾಯ ಹೆಗಡೆ, ಕಬ್ಬಿನಗದ್ದೆ- ಬೂರನ್-ತ್ಯಾಗಲಿ ಇವರೊಂದಿಗಿನ ಸಂದರ್ಶನ -2014

ಡಾ. ಆರ್. ವಿ. ಹೆಗಡೆ ನೈಗಾರ್, ಸಾಲ್ಕಣಿ ಇವರೊಂದಿಗಿನ ಸಂದರ್ಶನ

ಡಾ. ಆರ್. ವಿ. ಹೆಗಡೆ ನೈಗಾರ್, ಸಾಲ್ಕಣಿ ಇವರೊಂದಿಗಿನ ಸಂದರ್ಶನ

The germ fighter

                   The germ fighter

Craze about chemistry

 Craze about chemistry  

ಶ್ರೀ ಸತೀಶ ಹೆಗಡೆ, ಕಿಲಾರ, ಸಿದ್ದಾಪುರ ಇವರೊಂದಿಗಿನ ಸಂದರ್ಶನ

 ಸಂದರ್ಶನ ಲೇಖನ

ಆಯುರ್ವೇದ

 DAiÀÄĪÉÃðzÀ

 Brain Storming Questions

ಸ್ವಾಧ್ಯಾಯ ಥೆರಪಿ- ಎಂ. ಆರ್. ಎನ್.

 
https://drive.google.com/file/d/1DvB0u9sb0SJq8aTDXVCJEsUY-PokwS4R/view?usp=sharing


Friday 5 August 2022

Interview Articals

 ರಸಯೋಗಿ- ಎಂ. ಆರ್. ಎನ್.

Students' Corner 2022

 Societal Interface

 ರಸಯೋಗಿ- ಎಂ. ಆರ್. ಎನ್.

 Interview Article

 Students' Corner

Interview Article

 Interview Article

 

                    ¥sÀn0UÀ...

                                                   (DzÀÆæ ºÀ¤Ã M¼ÉîAiÀĪÀ.!)   

              ಪ್ರತಿಯೊಬ್ಬರಲ್ಲೂ ಗಟ್ಟಿಗೊಳ್ಳುತ್ತಿರುವ ನೆನಪುಗಳನ್ನು ನೀರಾಗಿಸಿದರೆ ಕೆಲವರಾದರೂ ಒಂದೆರಡು ಗುlÄPÀÄ ಕುಡಿದಾರೆಂಬ ನಂಬಿಕೆ. ಹೀಗಿರಲು, ನನ್ನೊಳು ಗಟ್ಟಿಯಾದ ಕೆಲವು ನೆನಪುಗಳಿಗೆ ಈಗೊಂದು ನೆಪಸಿಕ್ಕಿದೆ ನೀರಾಗಿ ಹರಿಯಲು...

              ಡಿಗ್ರೀ ಪ್ರಾರಂಭವಾದ ಮೊದಲ ದಿನ ಹೇಗಿತ್ತು?? ಎನ್ನುವುದು ದೇವರಾಣೆಗೂ ನೆನಪಿಲ್ಲ ಆದರೆ ಈಗ ಮುಂದೊಂದು ದಿನ  ಹೀಗೇ ಆಗಬೇಕು ಅಂದುಕೊಂಡರೆ ಅದನ್ನ ಮಾಡ್ತೇವೆ ಅನ್ನುವ ನಂಬಿಕೆ ಬಂದಿದೆ.ಏನೇ ಆದ್ರೂ ಅವತ್ತಿನ ನಮ್ಮ ಮನಸ್ಥಿತಿ ಈಗ ಕೆಲವೊಂದುಸಲಾ ನಗು ತರಿಸುತ್ತೆ....

                      ನನ್ನ ಕಾಲಿಗೂ ಚಪ್ಪಲಿ ಗುರುತು ಹೊಸತೇ ಅಂತಹ ಸಮಯ ಇನ್ನು ಉಳಿದವರ ಗುರುತು ಗುರುತೇ...ಹೀಗಿರುವಾಗ ಬೆಂಚಲ್ಲಿ ಕುಳಿತುಕೊಂಡಗಲೋ,ಕ್ಲಾಸ್ಸಿಂದ ಎದ್ದು ಹೊರಗಡೆ ಹೋಗಬೇಕಾದ್ರೋ, ಕಾರಿಡಾರ್ ಎಂಬ ಹೆದ್ದಾರಿಯಂತಿಪ್ಪ ಕಾಲುದಾರಿಯ¯ÉÆèà ಒಬ್ಬರ ಚಪ್ಪಲಿ ಮತ್ತೊಂಬರು ಮೆಟ್ಟಿ ನಮಸ್ಕಾರದ ಜೊತೆ sorry ಹೇಳಿ ಅಲ್ಲೇ ಪರಿಚಯ ಆದವರು ಅದೆಷ್ಟೋ ಸತ್ಸಂಗಿಗಳು...ಹಾಗೆಯೇ  ಅಪರಿಚಿತರ ಪರಿಚಯಿಸಿದ ಚಿರಪರಿಚಿತ ಜಾಗ ನಮ್ಮ ಕ್ಯಾಂಟೀನ್.

                   ಕಾಲೇಜುನಲ್ಲಿ ಟೈಂ ಟೇಬಲ್ ಕೊಟ್ಟಮೇಲೇ ಸಮಸ್ಯೆ ಉಂಟಾಗಿದ್ದು...ಮೊದಲು ಕ್ಲಾಸರೂಮ್ ಹುಡುಕುವುದೇ ಸಮಸ್ಯೆ ಆದ್ರೆ ನಂತರದಲ್ಲಿ ಒಂದೊಂದ್ class ಗೆ ತಿರುಗುವಂತದ್ದೇ ಸಮಸ್ಯೆ ಹೆಂಗೋ class ಹುಡುಕಿಕೊಂಡು ಹೋಗಿ ಒಳಗಿದ್ದ ma’am permision ತಗೊಂಡು ಒಳಗಡೆ ಹೋದ್ರೆ ಮಂಜುಗುಣಿ ತೇರು ...ದೇವ್ರೇ!!!ಅಂತೂ ಒಂದ್ ಬೆಂಚ್ ಹಿಡಿದು ಕುಳಿತುಕೊಂಡು ಸುಮಾರು ಹೊತ್ತು ಆದ್ರೂ ಅಲ್ಲಿ ma’am ಕಲಿಸುತ್ತ ಇದ್ರು C£ÉÆßÃzÀ£Àß ಅವರು ಬೋರ್ಡ್ ಮೇಲೆ ಮಾಡ್ತಾ ಇದ್ದ ದಾಳಿ ನೋಡಿ ತಿಳಿದುಕೊಂಡಿದ್ದೆ ಹೊರತು ಒಂದ್ ಕಾಳು ಅಕ್ಷರನೂ ನಮ್ಮ ಕಿವಿ ಮುಟ್ಟಲಿಲ್ಲ.ಇದೊಳ್ಳೆ ಕಥೆ ಅಂತ ಹಿಂತಿರುಗಿ ನೋಡಿದ್ರೆ ಭೂತನಂತ ಗೋಡೆ ನಿಂತಿತ್ತು ..ಅವಾಗ  ಪರಿಸ್ಥಿತಿಯ ಗಂಭೀರತೆ ಅರಿವಾಗಿದ್ದು ನಾನಿದ್ದಿದ್ದು ಕ್ಲಾಸ್ಸಿನ ಕೊನೆಯ ಬೆಂಚಿನಲ್ಲಿ ಎಂದು.......

ಇಂತ ಸಂದಿಗ್ದ ಸಮಯದಲ್ಲಿ ಬಾಣದಂತೆ ಬಂದ ಒಂದು ಪ್ರಶ್ನೆ ಅದೂ last bench 1st person ಎನ್ನುವ ಟ್ಯಾಗ್ ಲೈನ್ ನೊಂದಿಗೆ, ಇದ್ದ ಇಬ್ಬರಲ್ಲಿ ಪ್ರಶ್ನೆ ಯಾರಿಗೆ ಎಂದು ಬದಿಯಲ್ಲಿರುವನ ಮುಖ ನೋಡಿ ಅನಿವಾರ್ಯವಾಗಿ ಎದ್ದುನಿಲ್ಲಬೇಕು ಎನ್ನುವಷ್ಟರಲ್ಲಿ ಅದ್ಯಾರೋ ಪುಣ್ಯತಾಗಿತ್ತಿ ಗುನುಗುತ್ತಾ ಇದ್ದ ಉತ್ತರ ma’am ಗೆ ಕೇಳಿತ್ತು ನಾ ಕುಂತಿದ್ದೆ.

ಹಿಂಗೆ ಒಂದ್ ಗುರುವಾರ ಎಲ್ಲರೂ ಕಲರ್ ಫುಲ್ ...ಹೊಸತಾಗಿ ಪರಿಚಯ ಆದ ಎಲ್ಲ ಮುಖಗಳು!!!  ನೇರವಾಗಿ ಹೋಗಿ

May I come in sir.... ಬಾ ಅಂದ್ರು...ಹೋಗಿ ಕುಳಿತುಕೊಂಡೆ

ಹಿನ್ನೆಲೆ ಸಂಗೀತಕ್ಕೆ ಸಣ್ಣ ನಗು ....ನಾನು ಹೊಸಬ. ಗಣೇಶ್ ಸರ್ ಗೂ ಅನುಮಾನ ಬಂದಿರಲಕ್ಕೂ ನನ್ನ ಮುಖವೂ ಬೇರೆ ಥರ ಆಗಿತ್ತೇನೋ ಬಹುಶ ನೀನು 1st year?!! ಅಂದ್ರು .

            

ಹೌದು ಹೇಳಿ ತಲೆ ಎತ್ತಿನೂ ನೋಡ್ದೆ ಅಲ್ಲಿಂದ ಹೊರಬಂದಿದ್ದೆ,ಮುಖ ಅಂದ್ರೆ ಸೊಳೆ ತೆಗದ ಹಲಸಿನ ಹಣ್ಣು ..... ಅದು ನೋಡಿದ್ರೆ 2nd year ಕ್ಲಾಸ್  ಆಗಿತ್ತು.

ಹಂಗೊ ಹಿಂಗೋ... ಒಂದು ಹಂತಕ್ಕೆ ಬಂದು ಒಂದು ಜಗತ್ತು ಹಾಳು ಮಾಡುವ ಟೀಮ್ ತಯಾರಾಗಿತ್ತು...ಇದರೊಟ್ಟಿಗೆ ಶುರುವಾದ lab sessions, ಒಂದಾರಮೇಲೆ ಒಂದರಂತೆ ರಾಸಾಯನದ ರಸಾಯಣ, ಹಿಂಗೆ ಒಂದ್ ದಿವಸ ಅದೇನೋ solution ಬಿಸಿ ಮಾಡಿ ಮತ್ತೇನೋ ಸೇರಿಸಿ ಅಂದಿದ್ರು ಕೊನೆಯಲ್ಲಿ pink ಬಣ್ಣ ಬರುವವರೆಗೆ ಅದ್ಯಾವುದೋ ಒಂದು ಪ್ರತ್ಯಾಮ್ಲ ಸೇರಿಸಿ ಅಂದ್ರು..... ಲ್ಯಾಬ್ ಮುಗಿಸುವುದೇ ಗುರಿ ಆದ ನಮಗೆ pink colour ಒಂದೇ ನೆನಪಿತ್ತು, ಪ್ರತ್ಯಾಮ್ಲದ ಬದಲು ಅಲ್ಲಿರುವ ಪ್ರತಿಯೊಂದು ಆಮ್ಲವೂ ಹನಿಹನಿಯಾಗಿ conical flask ಸೇರಿತ್ತು pink colour ತರಿಸಿದ್ದೂ ಆಗಿತ್ತು. Ma’am ಆಯ್ತು ಹೇಳಿ colour ತೋರಿಸಿ ಇನ್ನೇನು

ತಿರುಗಬೇಕು ಅನ್ನುವಷ್ಟರಲ್ಲಿ “ma’am bunsen burner on ಆಗ್ತಾ ಇಲ್ಲ” ಎಂಬ ಕೂಗು ನಮ್ಮ ಎಲ್ಲ ಬಣ್ಣವನ್ನ ಬಿಳುಪಾಗಿಸುವ ಲಕ್ಷಣ ಕಂಡಿತ್ತು(ಇನ್ನೂ ನಮ್ಮ lab ಗೆ ಗ್ಯಾಸನ್ನೇ ಬಿಟ್ಟಿರಲಿಲ್ಲ )ನಂತರದ್ದೆಲ್ಲ tragedy....

                     ಇನ್ನು 4th sem semimicro analysis ...ಇದು ಇರುವ ಪೂರ್ತಿ ಸತ್ಯದಲ್ಲಿ ನಮ್ಮಬಳಿ ಇರುವ ಕೊನೆಯ RESULT ಮಾತ್ರ ಸತ್ಯ ಉಳಿದದ್ದೆಲ್ಲ ತತ್ತಿಯೊಳಗಿನ ಸತ್ಯ.

ಹೀಗೆ ಇಲ್ಲಿಂದ Botany ಲ್ಯಾಬ್ ನಲ್ಲಿ ಕಲಿತ, ಪಲ್ಯಕ್ಕೆ ಕೊಚ್ಚುವ ವಿಧಾನ(stain ಮಾಡಲು ಸಸ್ಯದ ತೆಳುವಾದ section ಗಳಿಗಾಗಿ ನಾವು ಮಾಡಿದ ಒದ್ದಾಟ),ಒಂದು ಸ್ವಲ್ಪ ದಪ್ಪ ಮತ್ತೊಂದು ತುಂಡಾಗಿತ್ತು...ಒಂದಕ್ಕೆ stain ಹೆಚ್ಚಾದರೆ ಮತ್ತೊಂದು ಮತ್ತೊಂದು ರೀತಿ....ಒಟ್ಟಿನಲ್ಲಿ ಎಲ್ಲವೂ ಸಮವಾಗಿ ಉತ್ತಮ ಪಲಿತಾಂಶ ಸಿಕ್ಕಿದ್ದು lab exam ನಲ್ಲಿ ಮಾತ್ರ. ದೇವರ ದಯೆಯೋ ಅಥವಾ ದೇವರಂಥ ಗುರುಗಳ ದಯೇನೋ ಆ ದೇವರಿಗೇ ಗೊತ್ತು.

           ಇನ್ನೊಂದು ಉಳಿದಿದ್ದು ಅಂದರೆ ಅದ್ಬುತ ಜಗತ್ತಿನಂತೆ ಕಂಡ biotech department, ಸಣ್ಣ ಹುಡುಗರು ಏನಾದ್ರು ಹೊಸತನ್ನ ನೋಡದಾಗ ಬರುವಂಥ ಪ್ರತಿಕ್ರಿಯೆ ನಮ್ಮಿಂದಲೂ ಬಂದಿತ್ತು....ನಮಗಿಂತ ಎತ್ತರವಾದ mechines ,ನೀಲಿ ಬೆಳಕು ಬರುವ ಟ್ಯೂಬ್ ಲೈಟ್(ultrviolet light),ಸಣ್ಣ ಸಣ್ಣ ಬಾಟಲ್ ಗಳಲ್ಲಿ ಬೆಳೆದ ಗಿಡಗಳು(tissue culture),ಆಗಾಗ್ಗೆ ಹೊಡೆಯುವ ಕುಕ್ಕರ್ ಶೀಟಿ(autoclave),ಸಂಪೂರ್ಣ ಹವಾನಿಯಂತ್ರಿತ growth chamber ಹೀಗೆ ಎಲ್ಲವೂ ಹೊಸತೇ.ಎಲ್ಲವನ್ನೂ ಮೊದಲಿಗೆ ನೋಡಿದ್ದು ..Orchid ಬೆಳೆಯಲು ಮಾಡಿದ ಸಾಹಸ ಅದಕ್ಕಿಂತಲೂ ದೊಡ್ಡದಾಗಿ ಬೆಳೆದ fungus...ನಂತರ  ಕಲಿತಿದ್ದು, ಈಗ ಹಸಿರಾಗಿ ಬೆಳದ ಗಿಡಗಳ ನೋಡಿದರೆ ಆಗುವ ಖುಷಿ.,

ಈ ಎಲ್ಲದರನಡುವೆ ಪರೀಕ್ಷೆ ಎನ್ನುವ ಹಲವು ನಿರೀಕ್ಷೆಗಳಿಗೆ ಅನಿರೀಕ್ಷಿತವಾಗಿ ಬಂದ ಉತ್ತರವಿದು.....

 

                                        "ಹುಡುಕಲು ಉತ್ತರವ ಕತ್ತಸರಿಸಿದೆ ಎತ್ತರಿಸಿ,

                                     ಕತ್ತರ(ರಿ)ಸಿದ ಉತ್ತರವ ಉತ್ತರಿಸಲು ತತ್ತರಿಸಿ,

                                     ಕತ್ತನು ಮತ್ತೇರಿಸಿ ಮತ್ತರಸಿದೆ ಸುತ್ತಲಿನ ಉತ್ತರವ".

 

ಇಲ್ಲಿ ಬಹುತೇಕ ವಿಷಯಗಳು ಕಲ್ಪನೆಯಾಗಿರಬಹುದು ,ನಿಜವೂ ಇದ್ದಿರಬಹುದು ಆದರೆ ಇವು ಒಂದು ದೊಡ್ಡ ಪರಿಚ್ಛೇದದ ಕೆಲವು ಬಿಟ್ಟಪದಗಳು ಮಾತ್ರ ....ಒಳಗಿನ ವಾಕ್ಯಗಳು ಜೀವನಕ್ಕೆ ಹೊಸ ಪಾಠವನ್ನೇ ಹೇಳಿದೆ, ಹೇಳುತ್ತಿದೆ ಮತ್ತು ಕಲಿಯುವವನಿಗೆ ಕಲಿಸುತ್ತದೆ .

Torch ಹಾಳಾಗಲ್ಲಿವರೆಗೂ ಅದರ ಬೆಳಕಿನಿಂದ ಬೇರೆಲ್ಲ ನೋಡಿರ್ತೀವಿ ಆದ್ರೆ torch ಹೇಗಿದೆ ಅಂತ ನೋಡುವ ಪ್ರಯತ್ನ ಮಾಡಿರುವುದಿಲ್ಲ.ಈ torch ನೋಡುವ ನೆಪದಲ್ಲಾದರೂ ನಮ್ಮನ್ನ ನಾವು ಹುಡುಕಿಕೊಳ್ಳುವ ಪ್ರಯತ್ನ ಮಾಡೋಣ ...ನೆನಪುಗಳು ಗಟ್ಟಿಗೊಳ್ಳುತ್ತಲೇ ಇರುತ್ತವೆ,ಸಾಧ್ಯವಾದಗೆಲ್ಲ ನೀರಾಗಿಸಿ ನಾವು ಹಗುರವಾಗೋಣ......

                        ರಸ-ಬಳಗದ ಪರವಾಗಿ.

-ವಿನಾಯಕ ಹೆಗಡ.

 Departmental News - 2012

 ರಸಯೋಗಿ- ಎಂ. ಆರ್. ಎನ್.

 Interview Article

ರಸಯೋಗಿ- ಎಂ. ಆರ್. ಎನ್.

  ಮೆಲುಕು

ಪದವಿ ಶಿಕ್ಷಣ ಹಂತದ ಕೊನೆಯ ಕ್ಷಣಗಳನ್ನು ಕಳೆಯುತ್ತಿರುವ ನಾನು, ನನ್ನ ವಿದ್ಯಾರ್ಥಿ ಜೀವನದ ಕೆಲವು ನೆನಪುಗಳನ್ನು, ಪ್ರಭಾವಬೀರಿದ ಅಂಶಗಳನ್ನು ವ್ಯಕ್ತಪಡಿಸುವ ಅವಕಾಶ “Chem -Whiz “ ನಲ್ಲಿ ಸಿಕ್ಕಿರುವುದೇ ಬಹಳ ದಿನಗಳವರೆಗೆ ನೆನಪುಳಿಯುವ ಸಂಗತಿ. ಪಿ.ಯು.ಸಿ ಶಿಕ್ಷಣವನ್ನು ಇದೇ ¸ಸಂಸ್ಥೆಯಲ್ಲಿ ಓದಿದ್ದ ನನಗೆ, ಪದವಿ ಹಂತಕ್ಕೆ ಬಂದಾಗ ಇಲ್ಲಿಯ ಪರಿಸರ ಹೊಸದೇನಾಗಿರಲಿಲ್ಲ. ಕಾರಣ ವಿಶೇಷವೆನಿಸುವಂತಹ ಅನುಭವ ಪ್ರಾರಂಭದಲ್ಲಿ ಆಗಿರಲಿಲ್ಲ. ಪಠ್ಯೇತರ ಚಟುವಟಿಕೆಗಳು ಕೇವಲ ಪ್ರೌಢಶಿಕ್ಷಣ ಹಂತದವರೆಗೆ ಎಂಬ ಮನೋಧೋರಣೆಯನ್ನು ಆಗ ಹೊಂದಿದವನಾಗಿದ್ದರಿಂದ NCC, NSS , ಸಾಹಿತ್ಯ, ಸಾಂಸ್ಕ್ರತಿಕ ವಿಷಯಗಳಲ್ಲಿ ಆಸಕ್ತಿಯನ್ನು ಕೋರಿಸದೇ ಮೊದಲ ವರ್ಷವನ್ನು ಕಳೆದೆ. ಎಮ್.ಕೆ. ಹೆಗಡೆ ಸರ್ ಅವರೊಂದಿಗಿನ ಆತ್ಮೀಯತೆಯ ಫಲವಾಗಿ ಬಿಡುವಿರುವಾಗ table tennis  ಆಡುವುದನ್ನು ಬಿಟ್ಟರೆ ಮತ್ತಾವ ಹವ್ಯಾಸವನ್ನು ಬೆಳೆಸಿಕೊಂಡಿರಲಿಲ್ಲ. ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಯಾವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುತ್ತಿರಲಿಲ್ಲ.

ಗಣೆಶ ಸರ್ ಅವರ ಪರಿಚಯ ಪಿ.ಯು.ಸಿ ಇಂದ ಇದ್ದರೂ ಅವರ ಜೊತೆ ಒಡನಾಟ ಪ್ರಾರಂಭವಾದದ್ದು ಪದವಿಯ ದ್ವಿತಿಯ ವರ್ಷದಲ್ಲಿ. Chemistry in nature, ಸಂವಹನ ಮತ್ತು ಆದ್ಯಾತ್ಮದಲ್ಲಿನ ಆಸಕ್ತಿ ಹಾಗೂ ಆದರ್ಶಪ್ರಾಯ ವ್ಯಕ್ತಿತ್ವುಳ್ಳವರೊಂದಿಗಿನ ಅವರ ಸಂಪರ್ಕ ನನ್ನನ್ನು ಅವರ ಹತ್ತಿರಕ್ಕೆ ಕರೆದೊಯ್ದ ಸಂಗತಿಗಳು. ಪ್ರತಿಸಲವೂ ಭೇಟಿಯಾದಾಗ ಅವರು ತಮಗೆ ಎಮ್.ಆರ್.ನಾಗರಾಜು ಅವರಿಂದ ಬಂದ ಸಂದೇಶದ ವಿವರಣೆ ನೀಡುತ್ತಿದ್ದರಿಂದ ಪ್ರತಿನಿತ್ಯ ಅವರನ್ನು ಸಂಪರ್ಕಿಸಬೇಕು ಅನ್ನಿಸುತ್ತಿತ್ತು.

ಕೆಲವು ತಿಂಗಳ ಹಿಂದೆ ಗಣೆಶ ಸರ್ ಅವರ ಸೂಚನೆಯ ಮೇರೆಗೆ ಡಾ11 ಸಾಂಬಮೂರ್ತಿ ಅವರನ್ನು ಭೇಟಿಮಾಡುವ ಅವಕಾಶ ಸಿಕ್ಕಿತು. ನಾನು ಸಾಂಬಮೂರ್ತಿ ಅವರ ‘appointment date and time‘ ಪಡೆಯಲು ಯಾವುದೇ ತಯಾರಿ ಇಲ್ಲದೇ ಹೋದವನು. ಆದರೆ ಅವರು ಒಮ್ಮೆಲೇ, ನಾನು ಈಗಲೇ free ಇದ್ದೇನೆ ಕುಳಿತುಕೋ, ವಿಷಯ ಪ್ರಾರಂಭಮಾಡು ಎಂದು ಹೇಳಿಯೇ ಬಿಟ್ಟರು. ನನಗೆ ಅನಿರೀಕ್ಷಿತವಾಗಿ ಸವಾಲು,ಅವಕಾಶ ಒದಗಿಸುವ ವಿಚಾರ ಅವರಲ್ಲಿತ್ತು. ನಂತರ ಅವರಜೊತೆ ಅರ್ಧಗಂಟೆ ಸಂವಾದ ನಡೆಸಿದೆ. ಈ ಘಟನೆಯನ್ನು ಸರ್ ಬಳಿ ಬಂದು ಹೇಳಿದಾಗ ಅವರ ತಕ್ಷಣದ ಪ್ರತಿಕ್ರಿಯೆಯ ಮಾತು, ಮನುಷ್ಯ ವ್ಯಕ್ತಿತ್ವದ ಮತ್ತೊಂದು ಪುಟವನ್ನು ನನ್ನೆದುರಿಗೆ ತೆರೆದಿಟ್ಟಿತು. ಆಮಾತುಗಳು ಹೀಗಿವೆ; “ ಮನುಷ್ಯ ವಿಚಾರವಂತನಾಗಿ ಒಂದು ಹಂತವನ್ನು ತಲುಪಿದ ಮೇಲೆ ಆತ ಪ್ರತಿಯೊಬ್ಬರಲ್ಲೂ ತನ್ನನ್ನು ಕಾಣುತ್ತಾನೆ. ಪ್ರತಿಯೊಬ್ಬರ ಬಗ್ಗೆಯೂ ಗೌರವ ಭಾವನೆ ಬಂದಿರುತ್ತದೆ. ವಿದ್ಯಾರ್ಥಿಯಾದ ನಿನಗೂ ನಿನ್ನದೇ ಆದ ಗೌರವ ಇದೆ. ಕಾರಣ ಅವರು ರೋಗಿಗಳಿದ್ದರೂ ನಿನಗೇ ಮೊದಲು ಅವಕಾಶ ನೀಡಿದ್ದು”.

ಎಮ್.ಆರ್. ನಾಗರಾಜು ಅವರನ್ನು ಬೆಂಗಳೂರಿನಲ್ಲಿ ಭೆಟಿಮಾಡುವ ಅವಕಾಶ ನನಗೆ ಸಿಕ್ಕಿತು. ನನ್ನ ಜೊತೆ ಬಿ.ಎಸ್ಸಿ ದ್ವಿತೀಯ ವರ್ಷದ ವಸಂತನೂ ಇದ್ದ ಕಾಲೇಜಿನ ಶಿಕ್ಷಕರಿಗೆ, IAS, KAS  ಅಭ್ಯರ್ಥಿಗಳಿಗೆ ತರಬೇತಿದಾರರಾಗಿ ಕಾರ್ಯ ನಿರ್ವಹಿಸುವ ಸದಾ ಕ್ರಿಯಾಶಾಲರಾಗಿರುವ ಅವರು ಅನಿರೀಕ್ಷಿತವಾಗಿ ಭೇಟಿಯಾದ ನಮ್ಮಿಬ್ಬರ ಜೊತೆ 3 ಗಂಟೆಗೂ ಅಧಿಕ ಕಾಲ ಆದ್ಯಾತ್ಮದ ಬಗ್ಗೆ ಮಾತನಾಡುತ್ತಾ ತಮ್ಮ ಅಮಯವನ್ನು ವಿನಿಯೋಗಿಸಿದ್ದನ್ನು ನೋಡಿದಾಗ, ಯುವ ವಿದ್ಯಾರ್ಥಿಗಳ ಮೇಲೆ ಅವರಿಗಿರುವ ವಿಶೇಷ ಕಾಳಜಿಯ ಅರ್ಥ ನಮಗಾಯಿತು.

“ Chem- Whizedittors ಸೇರಿ ಶಿವಾನಂದ್ ಕಳವೆಯವರ ಜೊತೆ ಸಂವಾದ ನಡೆಸಲು ಅವರ ಮನೆಗೆ ಹೂಗಿದ್ದೆವು. ಒಂದು ತಾಸಿನ ಸಂವಾದ ನಡೆಸಬೇಕೆಂದು ನಿರ್ಧರಿಸಿ ಹೋಗಿದ್ದ ನಾವು ಎರಡು ಗಂಟೆಗೂ ಅಧಿಕ ನಿರಂತರ ಸೋವಾದ ನಡೆಸಿದೆವು. ಅಷ್ಟು ಪರಿಣಾಮಕಾರಿಯಾಗಿತ್ತು ಆ ಮಾತುಕತೆ. ಅವರ ಮನೆಯಲ್ಲಿ ಎರಡು ಜಿಂಕೆಗಳು ಇವೆ. ‘ಅಭಿಜ್ಞಾನ ಶಾಕುಂತಲ’ ನಾಟಕದಲ್ಲಿ ಕಾಳಿದಾಸ ಮಹಾಕವಿ ಕಣ್ವ ಮಹರ್ಷಿಗಳ ಆಶ್ರಮ ಪರಿಸರವನ್ನು ವರ್ಣಿಸುವಾಗ ಜಿಂಕೆಗಳು ಶಾಕುಂತಲೆಯ ಕೈಯಲ್ಲಿರುವ ಹುಲ್ಲನ್ನು ಯಾವ ಅಂಜಿಕೆಯೂ ಇಲ್ಲದೇ ಬಂದು ತಿನ್ನುತ್ತಿದ್ದವು ಎಂದು ವಿವರಿಸುತ್ತಾನೆ. ನಮ್ಮ ಕೈಯಲ್ಲಿರುವ ಬಾಳೆಕಾಯಿ ಚಿಪ್ಸ್ ಅನ್ನು ಗೌರಿ ಎಂಬ ಜಿಂಕೆ ಯಾವ ಅಂಜಿಕೆಯೂ ಇಲ್ಲದೇ ಹತ್ತಿರ ಬಂದು ತಿಂದಾಗ ಕಾಳಿದಾಸನ ಆ ಕೃತಿಯನ್ನು ಓದಿದಾಗ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಘಟನೆ ನಿಜವಾಗಿ ಅನುಭವಿಸಿದಂತಾಯಿತು. ತಿರುಗಿ ಬರುವಾಗ Chem- Whiz  ಗೆ ಸೆರಿದ್ದಕ್ಕೆ ಸಾರ್ಥಕವಾಯಿತು ಎಂಬ ಭಾವ ನಮ್ಮೆಲ್ಲರಲಿತ್ತು

ಪದವೆ ಶಿಕ್ಷಣ ಹಂತದಲ್ಲಿ ನಾವು ವಿಷಯವನ್ನೇಕಲಿತಿರಲಿ, ಎಷ್ಟೇ ಅಂಕಗಳಿಸಿರಲಿ, ಮುಂದೆ ಯಾವ ಕ್ಷೇತ್ರವನ್ನಾದರೂ ಆಯ್ದುಕೊಂಡಿರಲಿ, ನಾವೆಲ್ಲರೂ ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಲೇಬೇಕು. ಸಮಾಜದಲ್ಲಿ ನಾವೊಬ್ಬ್ರಾಗಬೇಕು. 

Friends, whatever may be our background, educational qualifications, external appearance, status, position, these are all considered up to some extent only. Then after we are recognized only by our thoughts and the way we express it.

ಇದು ಸ್ಪರ್ಧಾತ್ಮಕ ಯುಗ. ಕಾರಣ ವಿದ್ಯಾರ್ಥಿಗಳು ಸ್ಪರ್ದಾ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಮಾತನ್ನು ಅನೇಕ ಸಲ ಹಿರಿಯರಿಂದ ಕೇಳಿದ್ದೇವೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸ್ಪರ್ಧೆಯ ಕೊನೆಯಲ್ಲಿ ಜಾರುವುದು ಸಂಘರ್ಷದೆಡೆಗೆ. ಜ್ಞಾನಾರ್ಜನೆಗೂ ಸ್ಪರ್ಧೆ ಬೇಕೆ? ಇದು ನಮ್ಮ ಅಂಸ್ಕøತಿಯೇ? ಈ ಎಲ್ಲಾ ಸ್ಪರ್ದೆಯ ಗುರಿ ಹಣ, ಗೌರವ ಜನಪ್ರಿಯತೆ ಪಡೆಯುವುದೇ ಅಲ್ಲವೆ? ಹಾಗಾದರೆ ಜ್ಞಾನ ಪಡೆಯುವಿಕೆಯ ಅಚಿತಿಮ ಪರಿಣಾಮ ಸೋಘರ್ಷವೇ? ಈ ಮೇಲಿನ ವಿಷಯಗಳಲ್ಲಿ ವಿಚಾರ, ವಿಮರ್ಷೆ, ಚಿಂತನೆ ಚರ್ಚೆಗಳಿಗೆ ಈ ಲೇಖನದ ಮೂಲಕ ತಮ್ಮನ್ನು ಆಹ್ವಾನಿಸುತ್ತಿದ್ದೇನೆ.

ಕರುಣಾಕರ್

Teachers' Corner

 ಈ ಅಧ್ಯಾಪಕರ ಹಾಗು ವಿಧ್ಯಾರ್ಥಿಗಳ ಅಂಕಣದಬಗ್ಗೆ ಈ ಅಂಕಣದಲ್ಲೇ ಪರಿಚಯಿಸುತ್ತಿದ್ದೇನೆ. ರಸಾಯನಶಾಸ್ತ್ರದ ಹೊರತಾಗಿ ಅವರವರ ಕಾಲೇಜಾನುಬವಗಳನ್ನ ಆಸಕ್ತಿ, ಕಳಕಳಿ, ವಿಶ್ಲೇಷಣೆ, ವೀಕ್ಷಣೆ, ವಿನೋದ, ವಿಡಂಬನೆಗಳನ್ನ ಸೃಜನಶೀಲವಾಗಿ ಮುಕ್ತವಾಗಿ ಯಾರ ಬಾವನೆಗಳಿಗೂ ಧಕ್ಕೆ ಬರದ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುವ ಅವಕಾಶವನ್ನ ಈ ಅಂಕಣಗಳಲ್ಲಿ ನೀಡುತ್ತಿದ್ದೇವೆ. ಸೃಜನಶೀಲ ಬರವಣಿಗೆಯನ್ನು ಪೆÇ್ರೀತ್ಸಾಹಿಸುವುದೇ ನಮ್ಮ ಉದ್ದೇಶ.

 

 * ಹಿಂದಿನ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಬೇಸಿಗೆಯ ಒಂದು ಮಟ ಮಟ ಮಧ್ಯಾಹ್ನದ ಸಮಯದಲ್ಲಿ ವಿಭಾಗದ ಗಣಕಯಂತ್ರದ ಮುಂದೆ ಆಂತರಿಕ ಪರೀಕ್ಷಾ ಕೆಲಸದ ನಿಮಿತ್ತ ಬೆವರು ಹರಿಸುತ್ತಾ ಕೆಲಸದಲ್ಲಿ ಮಗ್ನನಾಗಿದ್ದೆ. ಆಗ ಬಿಳಿ ಅಂಗಿ ಲುಂಗಿ ಉಟ್ಟಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರು(ರೈತ) ಯಾರನ್ನೋ ಹುಡುಕುತ್ತಾ ಆತಂಕದಿಂದ ನನ್ನೆದುರಿಗೆ ಬಂದ್ರು. ಇಲ್ಲಿಯ ಒಬ್ಬ ವಿದ್ಯಾರ್ಥಿಯ ಪಾಲಕರೆಂದು ತಿಳಿಯಿತು. ಅವರು ತಮ್ಮ ಮಗನ ಶೈಕ್ಷಣಿಕ ಪ್ರಗತಿಯ ಕುರಿತು ವಿಚಾರಿಸಲು ಬಂದಿದ್ದರು. ಆದರೆ ಅವರ ಮೊಗದಲ್ಲಿನ ಆತಂಕ, ನನ್ನಲ್ಲಿ ಮೂಡಿದ ಅನುಮಾನ ಪರಿಶೀಲಿಸಿದಾಗ ಅದು ಅವರ ಮಗನ ಶೈಕ್ಷಣಿಕ ಸಾಧನೆಯಲ್ಲಿ ಬಿಂಬಿತವಾಗಿತ್ತು. ಅವರನ್ನ ಸಾಂತ್ವನಪಡಿಸಿ ಅವರ ಮಗನ ಕಾಳಜಿವಹಿಸುವುದಾಗಿ ತಿಳಿಸಿ ಕಳುಹಿಸಿದೆ.

ಆದರೆ ಅವರ ಮಗನಾದ "ಅರ್ಜುನ"ನ ಪರಾಕ್ರಮಗಳೇನೆಂದು ತಿಳಿಯಲಿಲ್ಲ. ಕರೆಸಿ ಮಾತನಾಡಿಸಿ ಬುದ್ದಿವಾದ ಹೇಳಿ, ಪಾಲಕರ ಆಶಯದ ಬಗ್ಗೆ ಎಚ್ಚರಿಸಿ ಕಳುಹಿಸಿದೆ. ಒಂದು ಒಳ್ಳೆಯ ಕೆಲಸ ಮಾಡಿದ ಧನ್ಯ ಬಾವ ನನ್ನನ್ನಾವರಿಸಿತು. ಆದರೆ ವಿಭಾಗದಲ್ಲಿ ವಿಚಾರಿಸಿದಾಗ ತಿಳಿಯಿತು ಈ ಅರ್ಜುನನನ್ನು ತಿದ್ದಲು ಈಗಾಗಲೆ ದಿಪಾರ್ಟಮೆಂಟಿನ ಭೀಷ್ಮಾದಿ(ಹಿರೇಮಠ್ ಸರ್) ಯುಧಿಷ್ಠಿರರು(ಕಿಣಿ ಸರ್) ಪ್ರಯತ್ನಿಸಿ ಸೋತಿದ್ದಾರೆಂದು!!. ನಾನು ಈ ಅರ್ಜುನನಿಗೆ ಕೃಷ್ಣನಾಗಿ ಬೋಧಿಸಿದೆನೆಂದು ಬೀಗುತ್ತಿದ್ದೆ! ನಿಧಾನವಾಗಿ ನನ್ನ ಮೂರ್ಖತನದ ಅರಿವಾಯ್ತು. ಈ ಜಗತ್ತಿನಲ್ಲಿ ಯಾರು ಯಾರಿಗೆ ಗುರುವೆನ್ನುವುದಕ್ಕಿಂತ ( ಆ ಗುರುತತ್ವವು ) ಪ್ರತಿಯೊಬ್ಬರ ಅಂತರಂಗದಿಂದ ಉದಯವಾದ "ಎಚ್ಚರವೇ" ಆತನ ಗುರು. ಅದಕ್ಕೆ ಪ್ರೇರಣೆ ಯಾರು ಬೇಕಾದರೂ ಆಗಬಹುದು. ಈ ಮಾಸ್ತರರೇ ಆಗಬೇಕೆಂದೇನಿಲ್ಲ. ನಿಮ್ಮ ಸ್ನೇಹಿತರೇ ಆಗಬಹುದು ಅಥವಾ ಬೀದಿ ಭಿಕ್ಷುಕನೇ ಆಗಬಹುದು...... ಒಟ್ಟಿನಲ್ಲಿ ಎಚ್ಚರ ತಪ್ಪದಂತೆ ಆ ಗುರು ತತ್ವ ನಮ್ಮನ್ನೆಲ್ಲಾ ಕಾಪಡಲಿ.

* ಬಿಎಸ್ಸಿಯ ಐಅನೇ ಸೆಮಿಸ್ಟರ್ ನ 'ಅ' ವಿಭಾಗದ ತರಗತಿಯಲ್ಲಿ ಒಮ್ಮೆ ಚಿತ್ರದ ಮೂಲಕ ವಿವರಿಸಬೇಕಾದ ಸಂದರ್ಭ ಬಂತು ಮೂಲತಹ ಚಿತ್ರಬಿಡಿಸುವುದರಲ್ಲಿ ಉತ್ತಮನಲ್ಲದ್ದರಿಂದ ಒಬ್ಬ ವಿದ್ಯಾರ್ಥಿನಿಗೆ ಅವಕಾಶ ನೀಡಿ ಆತ್ಮೀಯ ವಿದ್ಯಾರ್ಥಿಯಾದ ಕರುಣಾಕರನಜೊತೆ ಕೂತೆ, ಕೂಡಲೆ ಆತ "ನೀರಿನಲ್ಲಿ ಗಾಳಿಯಿರುವುದೇ" ಸರ್ ಎಂದು ಕೇಳಿದ. ಅಂತೂ ಕೆಮ್ ಬಾಕ್ಸಿನಲ್ಲಿ ಕೆಮ್ಮದಿದ್ದರೂ ಹೀಗಾದರೂ ಒಂದು ಪ್ರಶ್ನೆ ಬಂತಲ್ಲ ಎಂದು ಸಂತೋಷವಾಯ್ತು. ವಿವರಿಸಿದೆ: ಹೌದು ನೀರಿನಲ್ಲಿ ಗಾಳಿ ಕರಗುತ್ತದೆ! ಹೇಗೆ? ಈ ಪ್ರಶ್ನೆ ನಿಮಗಾಗಿ ಯೋಚಿಸಿ.......

ಗಾಳಿ ನೀರಿನಲ್ಲಿ ಕರಗಿರುಗುವುದರಿಂದಲೇ ನೀರಿನಲ್ಲಿ ಜಲಚರಗಳ ಆವಾಸ ಸಾಧ್ಯ, ಹಾಗೆ ನೀರಿನಲ್ಲಿನ ಆಕ್ಸಿಜನ್ನಿನ ಪ್ರಮಾಣದಿಂದಲೇ ನೀರಿನ ಮಾಲಿನ್ಯ ಮಟ್ಟವನ್ನ ನಿರ್ಧರಿಸಲಾಗುವುದು(ಬಿ.ಓ.ಡಿ ಮತ್ತು ಸಿ.ಓ.ಡಿ) ಅಂದರೆ ನೀರಿನಲ್ಲಿ ಹೆಚ್ಚುಗಾಳಿ(ಆಕ್ಸಿಜನ್) ಕರಗಿದ್ದರೆ ಆ ನೀರು ಶುದ್ಧವಾದದ್ದೆಂದು ಪರಿಗಣಿಸಬಹುದು. ನೀರಿನಲ್ಲಿ ಆಕ್ಸಿಜನ್ ನ ಕರಗುವಿಕೆಯು ನೀರಿನ ತಾಪಕ್ಕೆ ವಿಲೋಮವಾಗಿ ಅವಲಂಬಿತವಾಗಿರುವುದು. ಹಾಗೆಯೇ ನೀರು ಮತ್ತು ಗಾಳಿಯ ಸಂಪರ್ಕ ಹೆಚ್ಚಿದಂತೆಲ್ಲಾ ಈ ಕರಗುವಿಕೆ ಹೆಚ್ಚುವುದು. "ಹರಿಯುವ ನೀರಿಗೆ ಶಾಸ್ತ್ರವಿಲ್ಲ" ಎಂಬುದನ್ನ ಕೇಳಿರಬಹುದು ಅದರರ್ಥ ಹರಿಯುವನೀರು ಹೆಚ್ಚು ಗಾಳಿಯ ಸಂಪರ್ಕಕ್ಕೆ ಬಂದು ಕರಗುವಿಕೆ ಹೆಚ್ಚುವುದು. ಈ ಕರಗಿದ ಆಕ್ಸಿಜನ್ ನೀರಿನಲ್ಲಿರುವ ಉತ್ಕರ್ಷಗೊಳ್ಳಬಲ್ಲ ಸಾವಯವ ಮಾಲಿನ್ಯಕಾರಕಗಳೊಂದಿಗೆ ವರ್ತಿಸಿ ಅವುಗಳನ್ನು ನಿರಪಾಯಕಾರಿ ಸಂಯುಕ್ತ ಅಥವಾ ನೀರು ಮತ್ತು ಇಂಗಾಲದ ಡೈ ಆಕ್ಸೈಡ್ ಆಗಿ ಪರಿವರ್ತಿಸುವುದು.

ಗಂಗಾ ನದಿಯ ಮಾಲಿನ್ಯ ಧಾರಣ ಶಕ್ತಿ ಹೆಚ್ಚಿರುವುದಕ್ಕೆ ವೈಜ್ಞಾನಿಕ ಕಾರಣಗಳು ಇವೇ. ಅಂದರೆ ಹಿಮಾಲಯದಲ್ಲಿ ಹುಟ್ಟುವುದರಿಂದ ಕಡಿಮೆ ಉಷ್ಣತೆಯಲ್ಲಿ ಹೆಚ್ಚು ಆಕ್ಸಿಜನ್ ಕರಗಿರುವುದು ಹಾಗೆ ಪರ್ವತ ಪ್ರದೇಶದಿಂದ ರಭಸವಾಗಿ ಇಳಿಯುವಾಗ ಈ ಕರಗುವಿಕೆ ಹೆಚ್ಚಾಗುವುದು.


* ಪಿ.ಎಂ.ಇ ವಿಭಾಗದ ನನ್ನ ಪ್ರಿಯ ವಿದ್ಯಾರ್ಥಿ ವಸಂತ ಆಗಾಗ ಭೇಟಿ ಮಾಡಿ ಚರ್ಚಿಸುವುದುಂಟು. ಏನಾದರೂ ಒಂದು ಒಳ್ಳೆಯ ಕೆಲಸ ಮಾಡುವ ತುಡಿತ ಇರುವ ಆತನ ಹತ್ತಿರ ನನ್ನ ಒಂದು ಪರಿಸರ ಕುರಿತ ಕಳಕಳಿಯನ್ನ ಹೇಳಿಕೊಂಡೆ. ಈ ಕುರಿತು ತಾವೆಲ್ಲಾ ಆಸಕ್ತ ವಿದ್ಯಾರ್ಥಿಗಳು ಪ್ರಯತ್ನಿಸಬಹುದು.  ವಿವಿಧ ರೀತಿಯ ಪ್ಲಾಸ್ಟಿಕ್ ನಿಂದಾಗಿರುವ ಸಮಸ್ಯೆ ನಮಗೆ ಹೊಸದೇನಲ್ಲ, ಆದರೆ ಸೂಕ್ತ ಮರು ಬಳಕೆ ಕಷ್ಟ ಸಾಧ್ಯವಾಗಿದೆ. ಮರು ಬಳಕೆ ಕಷ್ಟವಾದದ್ದು ಅದರ ತಂತ್ರಜ್ಞಾನಕಿಂತ ಆ ಪ್ಲಾಸ್ತಿಕ್ ತ್ಯಾಜ್ಯದ ಸಂಗ್ರಹ ಮತ್ತು ಸ್ವಚ್ಛ ಮಾಡುವ ಸಮಸ್ಯೆಯಿಂದಾಗಿದೆ. ಈ ಕುರಿತು ತಾವೆಲ್ಲಾ ವಿದ್ಯಾರ್ಥಿಗಳು ಕೆಲಸ ಮಾಡಿದಲ್ಲಿ ನಿಜಕ್ಕೂ ಅದ್ಭುತವಾದದ್ದನ್ನು ಸಾಧಿಸಬಹುದು. ಆಸಕ್ತರು ನನ್ನ ಬಳಿ ವಿಚಾರಿಸಿರಿ.

ಪ್ರಶ್ನೆಗಳನ್ನು ಕೇಳಲು ಮುಕ್ತ ಅವಕಾಶ ಒದಗಿಸಿದಾಗ್ಯೂ ನಿಃಷ್ಕ್ರಿಯವಾಗಿರುವಂಥಹ ಈ ಸಂದರ್ಭದಲ್ಲೂ  ತಮ್ಮ ಮುಗ್ದ ಮನಸ್ಸಿನಿಂದ ಮುಕ್ತವಾಗಿ ಆಗಾಗ ಪ್ರಶ್ನೆಗಳನ್ನು ಕೇಳುತ್ತಾ ನನ್ನನ್ನು ತುಕ್ಕು ಹಿಡಿಯದಂತೆ ಕಾಪಾಡುತ್ತಿರುವ ನನ್ನ ನೆಚ್ಚಿನ ವಿದ್ಯಾರ್ಥಿಗಳಾದ:  ಬಿಎಸ್ಸಿ ಒಂದನೇ ಸೆಮಿಸೆಮಿಸ್ಟರಿನ ಜಯರಾಜ್, ಮೂರನೇ ಸೆಮ್ ನ ಪೂಜಾ ಮತ್ತು ಸಂಪತ್ ಶಾಸ್ತ್ರಿ, ಐದನೇ ಸೆಮ್ ನ ಸುಮನ್ ಹಾಗು ಕರುಣಾಕರ್ ಇವರುಗಳನ್ನ ಆತ್ಮೀಯವಾಗಿ ಅಭಿನಂದಿಸುತ್ತೇನೆ ಹಾಗು ಉಳಿದವರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪಟ್ಟಿಗೆ ಸೇರ್ಪಡೆಯಾಗಲೆಂದು ಆಶಿಸುತ್ತೇನೆ.


-ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ


 Departmental News

 ರಸಯೋಗಿ ಎಮ್.ಆರ್.ಎನ್.

 Brain Storming Questions

 ರಸಯೋಗಿ- ಎಂ. ಆರ್. ಎನ್.

 STUDENTS’ CORNER - II Issue

Departmental News (2011-12)

1. Department submitted Minor Research Project proposal to University Grants Commission and is successful in getting grants of rupees 95,0000/- towards the conducting of  research.

 The Project title:   Synthesis, characterization, and biological activity studies of some                                       Quinolinone complexes of 3d-transition metals.

 Principal Investigator:     Dr. A.K.Kini

 Co-Investigator:              Prof. Ganesh S. Hegde

 Societal interface

ರಸಯೋಗಿ- ಎಮ್. ಆರ್. ಎನ್.                 

The Making of 2022 Chem-Whiz











Societal Interface

 2022ರ ನೂತನ ಅವತರಣಿಕೆಯ ಸಂಪಾದಕೀಯ

ಎಂಟನೇ ಅವತರಣಿಕೆಯ (2017 ) ಸಂಪಾದಕೀಯ

ಏಳನೇ ಅವತರಣಿಕೆಯ ಸಂಪಾದಕೀಯ

 Societal Interface

 ಆರನೇ ಅವತರಣಿಕೆಯ ಸಂಪಾದಕೀಯ

 CHEM-WHIZ” ಐದನೇ ಅವತರಣಿಕೆಯ ಸಂಪಾದಕೀಯ

 Societal Interface

 ನಾಲ್ಕನೇಯ ಅವತರಣಿಕೆಯ ಸಂಪಾದಕೀಯ

 

Societal Interface

ಅರಿಶಿಣದ ವಿವಿಧ ರೀತಿಯ ಬಳಕೆಯ ಬಗ್ಗೆ ತಾವೆಲ್ಲಾ ತಿಳಿದಿದ್ದೀರಿ, ಅವುಗಳ ಹಿಂದಿನ ವೈಜ್ಞಾನಿಕ ವಿಶ್ಲೇಷಣೆ ಹೀಗಿವೆ:

1.       ತೇಯ್ದ ಅರಿಶಿಣಕ್ಕೆ ಸುಟ್ಟ ಬಾಳೆ ಎಲೆಯ ಪುಡಿಯನ್ನ ಮಿಶ್ರಣಮಾಡಿ ಕೆಂಪು ಬಣ್ಣವಾಗಿ ಪರಿವರ್ತಿಸಿ ಉಪಯೋಗಿಸುತ್ತಾರೆ.:

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಾಳೆ ಎಲೆÀÉ ಬದಲಾಗಿ ಯಾವ ಎಲೆಯನ್ನಾದರೂ ಉದ್ದೇಶಕ್ಕೆÀ್ಕ ಉಪಯೋಗಿಸಬಹುದು! ಎಲೆ ಅಥವಾ ಗಿಡದ ಯಾವುದೇ ಬಾಗವನ್ನ ಸುಟ್ಟಾಗ ಬರುವ ಬೂದಿಯಲ್ಲಿ ಮೆಟೆಲ್ ಕಾರ್ಬೋನೇಟ್ ಗಳಿರುವುದು. ಮೆಟೆಲ್ ಕಾರ್ಬೋನೇಟ್ ಗಳು ನೀರಿಗೆ ಪ್ರತ್ಯಾಮ್ಲ ಗುಣವನ್ನ (Alkalinity) ನೀಡುವ್ಯದು, ಇದರಿಂದ ಅರಿಶಿಣದ ಅಣುವಿನಲ್ಲಿ ಕೆಲಬದಲಾವಣೆಗಳಾಗಿ ಕೆಂಪು ಬಣ್ಣಕ್ಕೆ ತಿರುಗುವುದು.

ಅಂದರೆ ಪಿಎಚ್ ಬದಲಾವಣೆಯಿಂದ ಅರಿಶಿಣದ ಬಣ್ಣವನ್ನ ಬದಲಾಯಿಸಬಹುದು! (ಹಳದಿ<--->ಕೆಂಪು ಮಾತ್ರ ಸಾಧ್ಯ)

2.      ಹಿಂದೆ, ಅರಿಶಿಣವನ್ನ ಬಟ್ಟೆಗೆ ಬಣ್ಣ ಹಾಕಲು ಉಪಯೋಗಿಸುತ್ತಿದ್ದರಂತೆ: ಅರಿಶಿಣಕ್ಕೆ ಸುಣ್ಣ ಬೆರೆಸಿ ನೀರಿನಲ್ಲಿ ದ್ರಾವಣ ಮಾಡಿ ಅದರಲ್ಲಿ ಬಟ್ಟೆ ಅದ್ದಿ ನಂತರ ಕೆಂಪಾದ ಬಟ್ಟೆಯನ್ನ ಹುಣಸೆ ಹಣ್ಣಿನ ನೀರಿನಲ್ಲಿ ಅದ್ದಿ ತೆಗೆದರೆ ಹಳದಿ ಬಣ್ಣದ ಬಟ್ಟೆ ರೆಡಿ!!! :                                                                                  ಅರಿಶಿಣವು ನೀರಿನಲ್ಲಿ ಕರಗುವುದಿಲ್ಲ, ಹಾಗಾಗಿ ಬರಿ ನೀರಿನಲ್ಲಿ ದ್ರಾವಣ ಮಾಡಿ ಬಣ್ಣ ಹಾಕಲು ಸಾಧ್ಯವಿಲ್ಲ. ಆದರೆ ಅದಕ್ಕೆ ಸುಣ್ಣ ಹಾಕಿ ಮಾಡಿದ ಕೆಂಪು ಬಣ್ಣವು ನೀರಿನಲ್ಲಿ ಕರಗಬಲ್ಲದು! ಹಾಗಾಗಿ ಬಟ್ಟೆಯನ್ನ ಇದರಲ್ಲಿ ಅದ್ದಿದಾಗ ಬಟ್ಟೆಗೆ ಕೆಂಪು ಬಣ್ಣ ಅಂಟಿಕೊಳ್ಳುವುದು ಆನಂತರ ಅದನ್ನ ಹುಣಸೆ ದ್ರಾವಣದಲ್ಲಿ ಅದ್ದಿದಾಗ ಅದು ಆಮ್ಲೀಯವಾಗಿರುವುದರಿಂದ ಮತ್ತೆ ಹಳದಿ ಬಣ್ಣಕ್ಕೆ ಹಿಂತಿರುಗುವುದು, ಆದರೆ ಈಗ ಸರಿಯಾಗಿ ಬಟ್ಟೆಗೆ ಅಂಟಿಕೊಳ್ಳುವುದು!! ಹೇಗಿದೆ ನಮ್ಮ ಪೂರ್ವಜರ ಡೈಯಿಂಗ್ ಟೆಕ್ನಾಲಜಿ!!!

3.      ಹಿಂದೆ ಹೋಳಿ ಹಬ್ಬ ಅಥವಾ ಓಕುಳಿಯಾಡುವಾಗ ಅರಿಶಿಣದ (ಸುಣ್ಣ ಹಾಕಿದ) ಕೆಂಪು ದ್ರಾವಣವನ್ನ ಪಿಚಿಕಾರಿಯಲ್ಲಿ ಉಪಯೋಗಿಸುತ್ತಿದ್ದರು :

ಇದರಿಂದ ಪ್ರಯೋಜನಗಳು ಇಂತಿವೆ: ) ಓಕುಳಿಗೆ ಬೇಕಾದ ಆಕರ್ಷಕ ಅಪಾಯರಹಿತ ಕೆಂಪು ಬಣ್ಣ.

) ಕೆಂಪಾದ ಅರಿಶಿಣವು ನೀರಿನಲ್ಲಿ ಕರಗುವುದರಿಂದ ಅರಿಶಿಣದಂತೆ(ಕರಗದಿರುವುದರಿಂದ) ಪಿಚಿಕಾರಿಯಲ್ಲಿ ಕಟ್ಟಿಕೊಳ್ಳುವ ಭಯವಿಲ್ಲ.

) ಕೆಂಪು ಬಣ್ಣವು ನೀರಿನಲ್ಲಿ ಕರಗುವುದರಿಂದ ಬಟ್ಟೆಯನ್ನು ಸ್ವಚ್ಛವಾದ ನೀರಿನಿಂದ ತೊಳೆದರೆ ಬಣ್ಣ ಮಾಯ!!!  ಇವುಗಳನ್ನ ಇಂದಿನ ಹೋಳಿ ಆಚರಣೆಗೆ ತಾಳೆ ಹಾಕಿದಾಗ ಇದರ ಮಹತ್ವ ಅರಿವಾದೀತು.

4.      ಆಹಾರದಲ್ಲಿನ ಅರಿಶಿಣದ ಬಳಕೆ ತಮಗೆಲ್ಲಾ ತಿಳಿದೇ ಇದೆ, ಇದು   ಅರ್ಭುದ ರೋಗ ಶಮನಕಾರಕವೆಂದು (Anti Cancer Agent) ಹೇಳುವುವರಿದ್ದಾರೆ, ಆದರೆ ಕುರಿತು ಹೆಚ್ಚಿನ ಸಂಶೋಧನೆಯಾಗಬೇಕಾಗಿದೆ.  

-ಪ್ರಧಾನ ಸಂಪಾದಕರು.

Environmental Pollution