Monday 9 January 2023

"Opportunities in the Creative Fields" -Natesh Hegde



ಕಾರ್ಯಕ್ರಮದ ವರದಿ:

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ  ಐ ಕ್ಯೂ ಎ ಸಿ ಸಂಯೋಜನೆಯಲ್ಲಿ ರಸಾಯನಶಾಸ್ತ್ರ ವಿಭಾಗದ ವತಿಯಿಂದ "ಸೃಜನಶೀಲ ಕ್ಷೇತ್ರದಲ್ಲಿನ ಅವಕಾಶಗಳು" ಎಂಬ  ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ  ಬರಹಗಾರ, ಚಲನಚಿತ್ರ ನಿರ್ದೇಶಕ ಶ್ರೀ ನಟೇಶ್ ಹೆಗಡೆ ಮಾತನಾಡಿ ನಿಮ್ಮದೇ ವಿವೇಚನೆಯಲ್ಲಿ ಬದುಕು ಕಟ್ಟಿಕೊಳ್ಳುವುದು ಬಹುಮುಖ್ಯ ಎನ್ನುವ ಮೂಲಕ ತಮ್ಮ ಜೀವನದ ಆರಂಭಿಕ ಪಯಣವನ್ನು ವಿವರಿಸಿದರು. ಕಥೆಯನ್ನು ರಚಿಸಿದರೆ ಅದನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯವಿರಬೇಕು. ಅದನ್ನು ಓದುವ ಜನರಿಗೆ ಮನಮುಟ್ಟುವಂತಿರಬೇಕು. ಸಿನಿಮಾ, ಕಥೆ ಮುಂತಾದವುಗಳು ಮನುಷ್ಯ ಸಾಧ್ಯತೆಗಳು. ಅವುಗಳನ್ನು ಮನುಷ್ಯ ಮಾಡಲು ಶಕ್ತನಾಗಿದ್ದಾನೆ. ಮನುಷ್ಯನ ಬದುಕು ಕ್ರಿಯಾತ್ಮಕವಾಗಿರಬೇಕು ಎಂದು ಹೇಳಿದರು. ಕಾಲೇಜು ಹಳೆಯ ವಿದ್ಯಾರ್ಥಿಯಾದ ಅವರು ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಂದಿನ ಕಾಲೇಜು ದಿನಗಳ ಕೆಲ ಸಂಗತಿಗಳನ್ನು  ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜನ ಕನ್ನಡ ಪ್ರಾಧ್ಯಾಪಕರಾದ ಆರ್.ಆರ್ ಹೆಗಡೆಯವರು ಅನುಭವ ಎನ್ನುವುದು ಭಾಷೆ ಮತ್ತು ಚಿತ್ರಗಳ ಮೂಲಕ ಅಭಿವ್ಯಕ್ತವಾಗುತ್ತದೆ. ಅದನ್ನು ನಟೇಶ್ ಹೆಗಡೆಯವರಲ್ಲಿ ಕಾಣಬಹುದು ಎಂದರು.

ಕಾರ್ಯ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ರಸಾಯನ ಶಾಸ್ತ್ರದ ಮುಖ್ಯಸ್ಥ ಗಣೇಶ್ ಹೆಗಡೆ ಪ್ರಸ್ತಾವಿಸಿದರು. ವಿದ್ಯಾರ್ಥಿ ಸಂಪತ್ ಕುಮಾರ್ ನಿರೂಪಿಸಿ ವಂದಿಸಿದರು.











No comments:

Post a Comment

Environmental Pollution